ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕೋಟ ಸುರೇಶರು ನಡುತಿಟ್ಟಿನ ಆಶಾಕಿರಣ : ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಏಪ್ರಿಲ್ 3 , 2016
ಎಪ್ರಿಲ್ 3, 2015

ಕೋಟ ಸುರೇಶರು ನಡುತಿಟ್ಟಿನ ಆಶಾಕಿರಣ : ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟಿ

ಕುಂಭಾಶಿ : ``ಅನ್ಯ ತಿಟ್ಟು ಮಟ್ಟುಗಳ ಪ್ರಭಾವದಿಂದ ಕುಂದಾಪುರ ಪರಿಸರದಲ್ಲಿ ಖ್ಯಾತಿವೆತ್ತ ಹರಾಡಿ-ಮಟ್ಪಾಡಿ ಶೈಲಿಯನ್ನೊಳಗೊಂಡ ಮದ್ಯಮತಿಟ್ಟಿನಲ್ಲಿ ಸದ್ಯ ಕಲಾವಿದರ ಕೊರತೆ ಕಾಣುತ್ತಿದ್ದು ಈ ಶೈಲಿಯನ್ನು ಸಮರ್ಪಕವಾಗಿ ಮೈಗೂಡಿಸಿಕೊಂಡ ಕೆಲವೇ ಕೆಲವು ಕಲಾವಿದರಲ್ಲಿ ಸದ್ಯ ಸುರೇಶ ಬಂಗೇರ ಅವರು ಮುಂದಿನ ಪೀಳಿಗೆಗೆ ಆಶಾಕಿರಣ. ಸಮರ್ಥ ಪುರುಷವೇಷದಾರಿಗಳಾದ ಕೀರ್ತಿಶೇಷ ಮೊಳಹಳ್ಳಿ ಹೆರಿಯನಾಯ್ಕ್ ಮತ್ತು ಶಿರಿಯಾರ ಮಂಜು ನಾಯ್ಕರ ಉತ್ತರಾದಿಕಾರಿಯಾಗಿ ಗುರುತಿಸಲ್ಪಡುವ ಇವರಿಗೆ ನಡುತಿಟ್ಟಿನ ಸಮರ್ಥ ಸೊಬಗನ್ನು ಮುಂದಿನ ಪೀಳಿಗೆಗೆ ದಾಟಿಸುವ ಗುರುತರ ಹೊಣೆಗಾರಿಕೆ ಇದೆ``ಎಂದು ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕರಾದ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು ಅಭಿಪ್ರಾಯ ಪಟ್ಟರು.

ಅವರು ಗೋಪಾಡಿಯಲ್ಲಿ ಶ್ರೀ ಅಮೃತೇಶ್ವರಿ ಮೇಳದಲ್ಲಿ ನೆಡೆದ ಕಲಾವಿದ ಕೋಟ ಸುರೇಶ ಬಂಗೇರರನ್ನು ಸನ್ಮಾನಿಸಿ ಮಾತನಾಡಿದರು. ಯಕ್ಷಗಾನ ರಂಗಕ್ಕೆ ಮೊಗವೀರ ಸಮಾಜದ ಕೊಡುಗೆ ಅನನ್ಯವಾಗಿದ್ದು ಸಮಾಜದ ಅನೇಕ ಕಲಾವಿದರು ಹಿಮ್ಮೇಳ ಮುಮ್ಮೇಳದಲ್ಲಿ ತೊಡಗಿಸಿಕೊಂಡು ಯಕ್ಷಗಾನದ ಬೆಳವಣಿಗೆಗೆ ಕಾರಣೀಕರ್ತರಾಗಿದ್ದರು ಎಂದರು. ಉದ್ಯಮಿ ಗಣೇಶ ಪುತ್ರನ್ ಅದ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ದೇವಸ್ಥಾನ ಮುಖ್ತೇಸರ ಗೋಪಾಲಕೃಷ್ಣ ಶೆಟ್ಟಿ. ಹಿರಿಯ ಪ್ರಸಂಗಕರ್ತ ರಮೇಶ್ಮಂಜು. ಸ್ಥಳಿಯಗಣ್ಯ ಬಾಬಣ್ಣ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮ ವ್ಯವಸ್ಥೆ ಮಾಡಿದ ಕಲಾಪ್ರೇಮಿ ಕೃಷ್ಣ ಕಾಂಚನ್ ಸ್ವಾಗತಿಸಿ ವಂದಿಸಿದರು. ಬಳಿಕ ಸುದನ್ವ ಕಾಳಗ-ಕನಕಾಂಗಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನೆರವೇರಿತು





Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ