ಕೋಟ ಸುರೇಶರು ನಡುತಿಟ್ಟಿನ ಆಶಾಕಿರಣ : ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಏಪ್ರಿಲ್ 3 , 2016
|
ಎಪ್ರಿಲ್ 3, 2015
|
ಕೋಟ ಸುರೇಶರು ನಡುತಿಟ್ಟಿನ ಆಶಾಕಿರಣ : ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟಿ
ಕುಂಭಾಶಿ :
``ಅನ್ಯ ತಿಟ್ಟು ಮಟ್ಟುಗಳ ಪ್ರಭಾವದಿಂದ ಕುಂದಾಪುರ ಪರಿಸರದಲ್ಲಿ ಖ್ಯಾತಿವೆತ್ತ ಹರಾಡಿ-ಮಟ್ಪಾಡಿ ಶೈಲಿಯನ್ನೊಳಗೊಂಡ ಮದ್ಯಮತಿಟ್ಟಿನಲ್ಲಿ ಸದ್ಯ ಕಲಾವಿದರ ಕೊರತೆ ಕಾಣುತ್ತಿದ್ದು ಈ ಶೈಲಿಯನ್ನು ಸಮರ್ಪಕವಾಗಿ ಮೈಗೂಡಿಸಿಕೊಂಡ ಕೆಲವೇ ಕೆಲವು ಕಲಾವಿದರಲ್ಲಿ ಸದ್ಯ ಸುರೇಶ ಬಂಗೇರ ಅವರು ಮುಂದಿನ ಪೀಳಿಗೆಗೆ ಆಶಾಕಿರಣ. ಸಮರ್ಥ ಪುರುಷವೇಷದಾರಿಗಳಾದ ಕೀರ್ತಿಶೇಷ ಮೊಳಹಳ್ಳಿ ಹೆರಿಯನಾಯ್ಕ್ ಮತ್ತು ಶಿರಿಯಾರ ಮಂಜು ನಾಯ್ಕರ ಉತ್ತರಾದಿಕಾರಿಯಾಗಿ ಗುರುತಿಸಲ್ಪಡುವ ಇವರಿಗೆ ನಡುತಿಟ್ಟಿನ ಸಮರ್ಥ ಸೊಬಗನ್ನು ಮುಂದಿನ ಪೀಳಿಗೆಗೆ ದಾಟಿಸುವ ಗುರುತರ ಹೊಣೆಗಾರಿಕೆ ಇದೆ``ಎಂದು ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕರಾದ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು ಅಭಿಪ್ರಾಯ ಪಟ್ಟರು.
ಅವರು ಗೋಪಾಡಿಯಲ್ಲಿ ಶ್ರೀ ಅಮೃತೇಶ್ವರಿ ಮೇಳದಲ್ಲಿ ನೆಡೆದ ಕಲಾವಿದ ಕೋಟ ಸುರೇಶ ಬಂಗೇರರನ್ನು ಸನ್ಮಾನಿಸಿ ಮಾತನಾಡಿದರು. ಯಕ್ಷಗಾನ ರಂಗಕ್ಕೆ ಮೊಗವೀರ ಸಮಾಜದ ಕೊಡುಗೆ ಅನನ್ಯವಾಗಿದ್ದು ಸಮಾಜದ ಅನೇಕ ಕಲಾವಿದರು ಹಿಮ್ಮೇಳ ಮುಮ್ಮೇಳದಲ್ಲಿ ತೊಡಗಿಸಿಕೊಂಡು ಯಕ್ಷಗಾನದ ಬೆಳವಣಿಗೆಗೆ ಕಾರಣೀಕರ್ತರಾಗಿದ್ದರು ಎಂದರು. ಉದ್ಯಮಿ ಗಣೇಶ ಪುತ್ರನ್ ಅದ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ದೇವಸ್ಥಾನ ಮುಖ್ತೇಸರ ಗೋಪಾಲಕೃಷ್ಣ ಶೆಟ್ಟಿ. ಹಿರಿಯ ಪ್ರಸಂಗಕರ್ತ ರಮೇಶ್ಮಂಜು. ಸ್ಥಳಿಯಗಣ್ಯ ಬಾಬಣ್ಣ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮ ವ್ಯವಸ್ಥೆ ಮಾಡಿದ ಕಲಾಪ್ರೇಮಿ ಕೃಷ್ಣ ಕಾಂಚನ್ ಸ್ವಾಗತಿಸಿ ವಂದಿಸಿದರು. ಬಳಿಕ ಸುದನ್ವ ಕಾಳಗ-ಕನಕಾಂಗಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನೆರವೇರಿತು
|
|
|